ಸ್ಪರ್ಶ

ನೀನು ಈ ಸರಳ ಜೀವನ ದಾರಿಯ
ಎಲ್ಲಾ ಸತ್ಯಗಳನ್ನು ನನಗೆ ತಿಳಿಸಿ ಹೇಳಬೇಕಾಗಿದೆ.

ಯಾವ ಅಹಂಕಾರವಿಲ್ಲದ ಒಂದು ಪ್ರೀತಿ
ನನ್ನ ಮನೆಯೊಳಗೆ ಅರಳಿ ಕಂಪು ಸೂಸಬೇಕಾಗಿದೆ.

ಈ ಜೀವನದಲಿ ಹೊಟ್ಟೆ ತುಂಬಿಸಿಕೊಳ್ಳುವ
ಮಾರ್ಗ ನೇರ ಮತ್ತು ಸಿಹಿ ನಿನ್ನಿಂದ ಆಗಬೇಕಾಗಿದೆ.

ಮಾತಿನಲಿ ಮೃದುತ್ವ ನಕ್ಷತ್ರಗಳ ಹೊಳಪು
ಮತ್ತು ನದಿಯ ಹರಿವಿಕೆ ನೀನು ತುಂಬಬೇಕಾಗಿದೆ.

ನನ್ನ ಬಳಗದ ಜನರೊಂದಿಗೆ ನೀಲಿ ಆಕಾಶದಲಿ
ರೆಕ್ಕೆ ಬಿಚ್ಚಿ ಹಾರಾಡುವದನ್ನು ನೀನು ಕಲಿಸಬೇಕಾಗಿದೆ.

ಅರಳುವ ಹೂವಿನ ಕಂಪಿನ ಬೆಳಕಿನ ಪ್ರಾರ್ಥನೆ
ನೀನು ನನ್ನ ಎದೆಯೊಳಕೆ ಇಳಿಸಬೇಕಾಗಿದೆ.

ನಾ ಯಾವ ಉದ್ದೇಶಗಳಿಲ್ಲದೇ ಬರೀ ಪ್ರೀತಿಯಿಂದ
ಅವರ ಕೈಗಳನ್ನು ಹಿಡಿದು ನಡೆಸಬೇಕಾಗಿದೆ.

ನೀ ಎಲ್ಲಾ ಒಲುಮೆಯ ಹಾಡುಗಳು ಇಂಪಾಗಿ
ಸೊಂಪಾಗಿ ಬದುಕಿನ ಆಳಕ್ಕೆ ಇಳಿಯುವಂತೆ ಮಾಡಬೇಕಾಗಿದೆ.

ಅದಕ್ಕಾಗಿ ದಯವಿಟ್ಟು ನೀ ಪ್ರೀತಿಯಿಂದ
ಚಿಟ್ಟೆಯಂತೆ ನನ್ನ ಒಮ್ಮೆ ಸ್ಪರ್ಶಿಸಬೇಕಾಗಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜನ್ಮಭೂಮಿ
Next post ಸಗ್ಗದೊಡೆಯನ ಬಿಂಕ

ಸಣ್ಣ ಕತೆ

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

cheap jordans|wholesale air max|wholesale jordans|wholesale jewelry|wholesale jerseys